Friday, December 08, 2006

ಪುಂಡಾಟಕ್ಕೆ ಕೊನೆಯೆಲ್ಲಿ?

ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆಗೆ ನಾಲ್ವರ ಬಲಿ, ಅಂಬೇಡ್ಕರ್ ಮೂರ್ತಿ ಭಗ್ನ: ಬೀದರ್, ನಾಗಪುರ, ಕಾನ್ಪುರ... ಉದ್ವಿಗ್ನ


ಈಚೆಗೆ ಪತ್ರಿಕೆಗಳಲ್ಲಿ ಈ ಸುದ್ದಿಗಳು ಸಾಮಾನ್ಯವಾಗಿಬಿಟ್ಟಿವೆ. ಯಾರೋ ಕಿಡಿ(ತಿಳಿ)ಗೇಡಿಗಳು ಮಾಡಿದ ಕೃತ್ಯಕ್ಕೆ ಹಿಂಸಾರೂಪದ ಪ್ರತಿಭಟನೆಯೇ? ಅಮೂಲ್ಯ ಜೀವಗಳ ಬಲಿಯೇ? ಮೂರ್ತಿಗೆ ಅವಮಾನ ಮಾಡಿದಾಕ್ಷಣ ಮಹಾನಾಯಕ ಅಂಬೇಡ್ಕರ್ ಅವರಿಗೆ ಅವಮಾನವಾಗಿಬಿಡುತ್ತದೆಯೇ?


ಈಚೆಗೆ ಚೆನ್ನೈನಲ್ಲಿ ರಸ್ತೆ ಕಾಮಗಾರಿಗಾಗಿ ವೃತ್ತವೊಂದರಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ತಾತ್ಕಾಲಿಕವಾಗಿ ರಸ್ತೆಬದಿಗೆ ಇರಿಸಿದ್ದೇ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು. ನಾಲ್ಕಾರು ಮೋಟರ್ ಸೈಕಲ್ ಗಳಲ್ಲಿ ಬಂದವರು (ಪೊಲೀಸರ ಪ್ರಕಾರ ದಲಿತ್ ಪ್ಯಾಂಥರ್ಸ್ ಕಾರ್ಯಕರ್ತರು) ಮಿಂಚಿನ ವೇಗದಲ್ಲಿ ನಾಲ್ಕು ಸರಕಾರಿ ಬಸ್ಸಿನ ಗಾಜಗಳಿಗೆ ಕಲ್ಲೆಸೆದು ಪರಾರಿಯಾದರು.


ಅಂಬೇಡ್ಕರ್ ಅವರ 50ನೇ ಪುಣ್ಯತಿಥಿ ಸಮೀಪಿಸಿದಂತೆ ಈಚೆಗೆ ಬೀದರ್, ಕಾನ್ಪುರ ಗಳಲ್ಲೂ ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ಇದೇ ಧಾಟಿಯ ಉಗ್ರ ಪ್ರತಿಭಟನೆ ವ್ಯಕ್ತವಾಗಿದೆ. ಜನರನ್ನು ಪ್ರಚೋದಿಸಲು ಕೆಲ ಪಕ್ಷಗಳು ಇದನ್ನು ರಾಜಕೀಯಗೊಳಿಸಿ ಬಂದ್ ಗೆ ಕರೆ ನೀಡಿ, ಹಿಂಸಾಚಾರಕ್ಕೂ ಪ್ರಚೋದನೆ ನೀಡಿವೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಗೋಲಿಬಾರ್ ನಲ್ಲಿ 6 ಜನ ಸಾವನ್ನಪ್ಪಿದ್ದಾರೆ.


ಇಡೀ ದೇಶಕ್ಕೆ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ತುಂಬಾ ಬಾಲಿಶವೆನಿಸುತ್ತದೆ. ಅವರೊಬ್ಬ ಎಲ್ಲಾ ಸಮುದಾಯಕ್ಕೂ ಸೇರಿದ ವ್ಯಕ್ತಿ ಎಂದು ಬಿಂಬಿತವಾದಾಗ ಮಾತ್ರ ಇಂಥ ಅನರ್ಥಗಳು ಆಗಾಗ ನಡೆಯುವುದಿಲ್ಲ.
ಇಲ್ಲದಿದ್ದರೆ ಇಂಥ ಹಿಂಸಾಕೃತ್ಯಗಳಿಂದ ಸಮಾಜದಲ್ಲಿ ದಲಿತರ ಬಗ್ಗೆ ಎಂಥ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ನಾವೆಲ್ಲ ಗಂಭೀರವಾಗಿ ಯೋಚಿಸಬೇಕು.

6 Comments:

At 10:19 PM, December 08, 2006, Blogger Kesari said...

ನೀವು ಸಮಾನ ಮನಸ್ಕರಾಗಿದ್ದರೆ ನನ್ನ ಬ್ಲಾಗಿನಲ್ಲಿ contributor ಆಗಲು ಆಹ್ವಾನಿಸುತ್ತೇನೆ.
oarjuna.blogspot.com

ಯಾವಾಗ್ಲಾದ್ರು ನನ್ನ ಬ್ಲಾಗಿನಲ್ಲಿ ಒಂದೊಂದು ಇಂಗ್ಲೀಷ್ ಪೋಸ್ಟ ಅನುವಾದ ಮಾಡುವವರಿಗಾಗಿ ಹುಡುಕುತ್ತಿದ್ದೇನೆ.

 
At 10:24 AM, December 29, 2006, Blogger Shiv said...

ವಿಶ್ವನಾಥರೇ,

ನೀವು ಹೇಳಿದ್ದು ನಿಜ..ಪ್ರತಿಮೆಗೆ ಅಪಮಾನ ಮಾಡಿದರೆ ಆ ನಾಯಕರಿಗೆ ಆಪಮಾನವಾಗುತ್ತೋ ಇಲ್ವೋ ಗೊತ್ತಿಲ್ಲ..ಆದರೆ ಆಪಮಾನ ಮಾಡಿದವರಿಗೆ ಬೇಕಾಗಿರೋದು ಸಿಗುತ್ತೆ.ಅವರಿಗೆ ಬೇಕಾಗಿರೋದೇ ಸಮಾಜದ ಶಾಂತಿ ಕದಡೋದು..ಅದರ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳೋದು..

 
At 1:51 PM, August 15, 2007, Anonymous Anonymous said...

ಬೆಳಗಾವಿಯಲ್ಲಿ ಮತ್ತೆ ಕನ್ನಡಕ್ಕೆ ಜಯ

http://karave.blogspot.com/

www.karnatakarakshanavedike.org

 
At 12:40 AM, March 08, 2008, Blogger ಶ್ರೀನಿಧಿ.ಡಿ.ಎಸ್ said...

ನಮಸ್ತೇ ,
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

 
At 12:29 PM, April 23, 2008, Blogger Vishwanath said...

Nice to hear about Pranathi. Since I could not update my blog for quite a long time, for several reasons, unable to know about it. Anyway, it is good forum to meet all Kannada bloggers. Thanks for the founder (I guess, Shrinidhi is the brain behind this initiative) of this forum.

Nanna system nalli Kannada fonts illadiruvudakke English nalli ee comment.

Ishtaralle matte Kannada blog nondige matte baruve!

Namaskara.
Vishwanath

 
At 7:33 PM, May 30, 2008, Blogger Unknown said...

Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

 

Post a Comment

<< Home